ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಶ್ರೀಸಾಮಾನ್ಯನ ಮುಖದಲ್ಲಿ ಸಂತಸ ಮೂಡಿದೆ. ಮುಂಬರುವ ಅವಧಿಯಲ್ಲಿ ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯೂ ಇದೆ. ಎಲ್ಲಿ? ಯಾವಾಗ? ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಈಗ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ. ಶ್ರೀಸಾಮಾನ್ಯನ ಮುಖದಲ್ಲಿ ತುಸು ಖುಷಿ ಕಾಣುತ್ತಿದೆ ಎಂದೇ ಹೇಳಬಹುದು. ಕಳೆದ ವರ್ಷದಿಂದ ತೈಲ ಬೆಲೆ ಇಳಿಕೆಯಾಗಿದೆ. ಮುಂಬರುವ ಅವಧಿಯಲ್ಲಿ ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯೂ ಇದೆ
ಇತ್ತೀಚೆಗೆ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಖಾದ್ಯ ತೈಲದ ಮೇಲೆ ಸಬ್ಸಿಡಿ ನೀಡಲು ಮುಂದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಬಹುದು. ಸಬ್ಸಿಡಿ ಅಡಿಯಲ್ಲಿ ಕಡಿಮೆ ದರದಲ್ಲಿ ಖಾದ್ಯ ತೈಲವನ್ನು ಪಡೆಯಬಹುದು. ಆದರೆ ಆಯ್ಕೆಯಾದವರು ಮಾತ್ರ ಅದರ ಲಾಭವನ್ನು ಪಡೆಯಬಹುದು.
ರಾಜ್ಯ ಸರ್ಕಾರವು ಪಡಿತರ ಅಂಗಡಿಗಳಿಗೆ ಅಡುಗೆ ಎಣ್ಣೆಯನ್ನು ಸರಬರಾಜು ಮಾಡುವುದಾಗಿ ಘೋಷಿಸಿದೆ. ಸಾಸಿವೆ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಪೂರೈಸಲಾಗುವುದು ಎಂದು ಸರ್ಕಾರವೇ ತಿಳಿಸಿದೆ. ಖುದ್ದು ಮುಖ್ಯಮಂತ್ರಿಗಳೇ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಹಿಂದಿನ ಬೆಲೆಗೆ ಹೋಲಿಸಿದರೆ ಈಗ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಅಂದರೆ 37ರಿಂದ 40 ರೂಪಾಯಿಗೆ ಅಡುಗೆ ಎಣ್ಣೆ ಸಿಗಲಿದೆ. ಇತರರಿಗೆ ಪ್ರತಿ ಲೀಟರ್ಗೆ 110 ರೂಪಾಯಿಗೆ ತೈಲ ಸಿಗಲಿದೆ ಎಂದು ಹೇಳಲಾಗಿದೆ
ಜೂನ್ 2023ರ ಮೊದಲು, ಕಂತು ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಫಲಾನುಭವಿಗಳಿಗೆ ರೂ.142 ಕ್ಕೆ ಲಭ್ಯವಿರುತ್ತದೆ. ಬಡತನ ರೇಖೆಗಿಂತ ಮೇಲಿರುವ ಜನರಿಗೆ (ಎಪಿಎಲ್) ರೂ.147ಕ್ಕೆ ತೈಲ ಸಿಗಲಿದೆ.
ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಈ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ. ಕೆಲ ದಿನಗಳಿಂದ ಖಾದ್ಯ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಮುಂಬರುವ ಅವಧಿಯಲ್ಲೂ ಬೆಲೆ ಮತ್ತಷ್ಟು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ
ಈಗ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ವರ್ಷ ತಾಳೆ ಎಣ್ಣೆ ಬೆಲೆ 165 ಇತ್ತು. ಆದರೆ ಈಗ 100 ರೂಪಾಯಿಗೆ ಇಳಿದಿದೆ. ಇದೀಗ 1 ಲೀಟರ್ ಅಡುಗೆ ಎಣ್ಣೆ ಬೆಲೆ 94 ರೂ.ಗೆ ಇಳಿದಿದೆ. ಅಂದಹಾಗೆ ಈ ಯೋಜನೆ ಹಿಮಾಚಲ ಪ್ರದೇಶ ಸರ್ಕಾರದ ಭಾಗ್ಯ ಯೋಜನೆಗಳಲ್ಲಿ ಒಂದಾಗಿದೆ.