MGNREGA Scheme-ನರೇಗಾ ಯೋಜನೆಯಲ್ಲಿ ಏನಿಲ್ಲ ಬದಲಾವಣೆ ಮಾಡಲಾಗುತ್ತಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

By SVR Creations

ಕೇಂದ್ರ ಸರಕಾರದಿಂದ ನರೇಗಾ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದ್ದು ಇದರಿಂದ ನರೇಗಾ ಯೋಜನೆಯಡಿ(Narega) ಆರ್ಥಿಕ ನೆರವು ಪಡೆಯುವ ಜನರಿಗೆ ಯಾವೆಲ್ಲ ಪರಿಣಾಮಗಳು ಬೀರಲಿವೆ ಎನ್ನುವ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಈಗ ದೊಡ್ಡ ಮಟ್ಟದ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ. ಈ ಹಿಂದೆ ಕೇವಲ 'ಉದ್ಯೋಗ ನೀಡುವ' ಉದ್ದೇಶ ಹೊಂದಿದ್ದ ಈ ಯೋಜನೆ, ಈಗ 'ವಿ ಬಿ ಜಿ ರಾಮ್ ಜಿ' (VB-GRAM G Act) ಅಥವಾ 'ವಿಕಸಿತ್ ಭಾರತ್ ಗ್ರಾಮೀಣ ಅಭಿವೃದ್ಧಿ ಮತ್ತು ನಿರ್ವಹಣಾ ಕಾಯ್ದೆ' ಎಂಬ ಹೊಸ ರೂಪದೊಂದಿಗೆ ಚರ್ಚೆಗೆ ಬಂದಿದೆ.

ಕರ್ನಾಟಕದಲ್ಲಿ ಈ ಯೋಜನೆಯ ಬದಲಾವಣೆಗಳು ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿವೆ. ಹಾಗಾದರೆ ಹಳೆ ಯೋಜನೆ ಮತ್ತು ಹೊಸ ಪ್ರಸ್ತಾಪಿತ ಬದಲಾವಣೆಗಳ ನಡುವಿನ ವ್ಯತ್ಯಾಸವೇನು? ಇದರಿಂದ ಜನರಿಗಾಗುವ ಲಾಭ-ನಷ್ಟಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Viksit Bharat- G RAM G Act 2025-ಹೆಸರಿನ ಬದಲಾವಣೆ ಮತ್ತು ಹೊಸ ದೃಷ್ಟಿಕೋನ:

ಹಿಂದಿನ ನರೇಗಾ ಯೋಜನೆಯನ್ನು ಈಗ 'ವಿ ಬಿ ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡುವ ಪ್ರಸ್ತಾಪವಿದೆ. ಇದು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಾಗಿ ಬಜೆಟ್ ಮಿತಿಯ ಮೂಲಭೂತ ಬದಲಾವಣೆಯಾಗಿದೆ. ಈ ಹೊಸ ವ್ಯವಸ್ಥೆಯನ್ನು 'ಬಜೆಟ್ ಕ್ಯಾಪ್ಡ್ ಇನ್ಫ್ರಾಸ್ಟ್ರಕ್ಚರ್ ಮಿಷನ್' (Budget-capped Infrastructure Mission) ಎಂದು ಕರೆಯಲಾಗುತ್ತಿದೆ. ಅಂದರೆ, ಈ ಹಿಂದೆ ಇದ್ದ ಮುಕ್ತ ನಿಧಿ ಹಂಚಿಕೆಯ ಬದಲಾಗಿ, ನಿಗದಿಪಡಿಸಿದ ಬಜೆಟ್ ಮಿತಿಯೊಳಗೆ ಮಾತ್ರ ಕೆಲಸಗಳನ್ನು ಕೈಗೊಳ್ಳಬೇಕಾಗುತ್ತದೆ.

Narega Scheme-ಉದ್ಯೋಗದ ದಿನಗಳ ಸಂಖ್ಯೆ ಮತ್ತು ವೇತನ:

ಹಳೆಯ ನೀತಿ: ಈ ಹಿಂದೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ನೀಡುವ ಭರವಸೆ ಇತ್ತು. ಇದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಕೆಲಸ ಕೇಳಿದವರಿಗೆ ಕೆಲಸ ನೀಡುವುದು ಸರ್ಕಾರದ ಕರ್ತವ್ಯವಾಗಿತ್ತು.

ಹೊಸ ನೀತಿ: ಹೊಸ ಪ್ರಸ್ತಾಪದ ಪ್ರಕಾರ, ವಾರ್ಷಿಕ ಕೆಲಸದ ದಿನಗಳನ್ನು 125 ದಿನಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಆದರೆ, ಇಲ್ಲಿ ಒಂದು ಮುಖ್ಯ ಷರತ್ತಿದೆ. ಕೆಲಸವು ಕೇಂದ್ರ ಸರ್ಕಾರ ನೀಡುವ ಬಜೆಟ್ ಲಭ್ಯತೆಗೆ ಅನುಗುಣವಾಗಿ ಮಾತ್ರ ದೊರೆಯುತ್ತದೆ. ಹಣದ ಕೊರತೆ ಇದ್ದಲ್ಲಿ ಕೆಲಸದ ದಿನಗಳು ಕಡಿತಗೊಳ್ಳುವ ಆತಂಕವೂ ಇದೆ.

Nrega Scheme Changes-ಆರ್ಥಿಕ ಹೊರೆ ಮತ್ತು ಅನುದಾನ ಹಂಚಿಕೆ:

ಯೋಜನೆಯ ಹಣಕಾಸಿನ ವಿಚಾರದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ:

ಹಳೆಯ ಪದ್ಧತಿ: ಈ ಹಿಂದೆ ಕೂಲಿ ಪಾವತಿಯ 100% ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಸಾಮಗ್ರಿ ವೆಚ್ಚದಲ್ಲಿ ಕೇಂದ್ರ 75% ಮತ್ತು ರಾಜ್ಯ 25% ರಷ್ಟು ಹಂಚಿಕೊಳ್ಳುತ್ತಿದ್ದವು.

ಹೊಸ ಪದ್ಧತಿ (60:40 ಅನುಪಾತ): ಹೊಸ ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರದ ಪಾಲು 60% ಕ್ಕೆ ಇಳಿಕೆಯಾಗಲಿದ್ದು, ರಾಜ್ಯ ಸರ್ಕಾರಗಳು 40% ರಷ್ಟು ವೆಚ್ಚವನ್ನು ಭರಿಸಬೇಕಾಗಬಹುದು. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ವಾರ್ಷಿಕ ಸುಮಾರು 1.51 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳುವ ಅಂದಾಜಿದೆ. ಈ ಕ್ರಮದಿಂದಾಗಿ ರಾಜ್ಯ ಸರಕಾರವು ಹೆಚ್ಚುವರಿಯಾಗಿ ನರೇಗಾ ಯೋಜನೆಗೆ ಅನುದಾನವನ್ನು ಮೀಸಲಿಡಬೇಕಾಗುತ್ತದೆ.

Payment Timing-ವೇತನ ಪಾವತಿಗೆ 15 ದಿನ ಕಾಲಮಿತಿ ಮತ್ತು ನಿರುದ್ಯೋಗ ಭತ್ಯೆ:

ನೂತನ ನಿಯಮದ ಪ್ರಕಾರ ನರೇಗಾ ಕೂಲ ಕಾರ್ಮಿಕರಿಗೆ 15 ದಿನದ ಕಾಲಮಿತಿ ಒಳಗೆ ಕೂಲಿ ವೆಚ್ಚವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು ಎಂದು ನಿಯಮವನ್ನು ರೂಪಿಸಲಾಗಿದ್ದು ಇದಲ್ಲದೇ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ಸಹ ಒದಗಿಸಬೇಕಾಗುತ್ತದೆ.

Nrega Scheme Guidelines-ಯಂತ್ರೋಪಕರಣಗಳ ಬಳಕೆಗೆ ಅವಕಾಶ:

ನರೇಗಾ ಯೋಜನೆಯ ಮೂಲ ಉದ್ದೇಶವೇ 'ಮಾನವ ಶ್ರಮ'ಕ್ಕೆ ಆದ್ಯತೆ ನೀಡುವುದಾಗಿತ್ತು. ಆದರೆ ಹೊಸ ಬದಲಾವಣೆಗಳಲ್ಲಿ ಯಂತ್ರಗಳ ಬಳಕೆಗೂ ಅವಕಾಶ ನೀಡಲು ನಿಯಮವಿರುವ ಕಾರಣ ಕಠಿಣ ಕೆಲಸಗಳು ಅಥವಾ ಮಾನವ ಶ್ರಮದಿಂದ ಅಸಾಧ್ಯವಾದ ಕಾಮಗಾರಿಗಳಿಗೆ 40% ರಷ್ಟು ಪ್ರಮಾಣದಲ್ಲಿ ಯಂತ್ರಗಳನ್ನು ಬಳಸಲು ಅನುಮತಿ ನೀಡುವ ಸಾಧ್ಯತೆ ಇದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಹೆಚ್ಚಬಹುದು ಎಂಬ ವಾದವಿದ್ದರೂ, ಗ್ರಾಮೀಣ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ತಪ್ಪುವ ಆತಂಕ ಎದುರಾಗಿದೆ.

MGNREGA Scheme Details

ಡಿಜಿಟಲೀಕರಣ ಮತ್ತು ಪಾರದರ್ಶಕತೆ:

ಭ್ರಷ್ಟಾಚಾರ ತಡೆಗಟ್ಟಲು ತಂತ್ರಜ್ಞಾನದ ಬಳಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ:

ಜಿಯೋ ಟ್ಯಾಗಿಂಗ್: ಪ್ರತಿಯೊಂದು ಕಾಮಗಾರಿಯ ಸ್ಥಳವನ್ನು ಜಿಯೋ ಟ್ಯಾಗಿಂಗ್ ಮಾಡಲಾಗುತ್ತದೆ.

ಮುಖ ಗುರುತಿಸುವಿಕೆ (Face Recognition): ಕಾರ್ಮಿಕರ ಹಾಜರಾತಿಗಾಗಿ ಬಯೋಮೆಟ್ರಿಕ್ ಅಥವಾ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸಲಾಗುವುದು. ಇದರಿಂದ ನಕಲಿ ಜಾಬ್ ಕಾರ್ಡ್‌ಗಳ ಹಾವಳಿ ತಪ್ಪಿಸಬಹುದು.

ನೇರ ನಗದು ವರ್ಗಾವಣೆ (DBT): ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.

ಕೃಷಿ ಮತ್ತು ತೋಟಗಾರಿಕೆಗೆ ಆದ್ಯತೆ:

ಈ ಮೊದಲು ನರೇಗಾ ಕೆಲಸಗಳು ಕೇವಲ ಕೆರೆ ಹೂಳೆತ್ತುವಿಕೆ ಅಥವಾ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈಗ ಅದನ್ನು ವಿಸ್ತರಿಸಲಾಗಿದ್ದು, ರೈತರ ಖಾಸಗಿ ಜಮೀನಿನಲ್ಲಿ ಕೃಷಿ ಚಟುವಟಿಕೆಗಳು, ತೋಟಗಾರಿಕೆ ಕೆಲಸಗಳು, ಕೊಯ್ಲು ನಂತರದ ಕೆಲಸಗಳಿಗೂ ನರೇಗಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದು ಕೃಷಿ ವಲಯದ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ.

Nrega Scheme Statistics-ಅಂಕಿ-ಅಂಶಗಳು ಏನು ಹೇಳುತ್ತವೆ?

2022-23 ರಲ್ಲಿ ಮೇ ತಿಂಗಳಲ್ಲಿ ಸುಮಾರು 1.72 ಕೋಟಿ ಮಾನವ ದಿನಗಳು ಸೃಜನೆಯಾಗಿದ್ದರೆ, 2025-26 ರ ವೇಳೆಗೆ ಅದು 1.82 ಕೋಟಿ ಆಸುಪಾಸಿನಲ್ಲಿದೆ. ಆದರೆ ಒಟ್ಟಾರೆಯಾಗಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಮತ್ತು ಕೇಂದ್ರದ ನಡುವಿನ ಸಮನ್ವಯದ ಕೊರತೆಯಿಂದಾಗಿ ಕೆಲವೆಡೆ ಹಿನ್ನಡೆಯಾಗಿದೆ. ಕರ್ನಾಟಕದಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಕುಸಿತ ಕಂಡುಬಂದಿದೆ.

ರಾಜಕೀಯ ಸಂಘರ್ಷ ಮತ್ತು ವಿರೋಧ:

ಈ ಬದಲಾವಣೆಗಳಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. "ನರೇಗಾ ಎಂಬುದು ಬಡವರ ಬದುಕಿನ ಹಕ್ಕು, ಅದನ್ನು ಬಜೆಟ್ ಮಿತಿಗೆ ಒಳಪಡಿಸುವುದು ಬಡವರ ಹೊಟ್ಟೆ ಹೊಡೆಯುವ ಕೆಲಸ" ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಹಳೆಯ ಬಾಕಿ ಬಿಡುಗಡೆ ಮತ್ತು ಹೊಸ ನಿಯಮಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ನರೇಗಾ ಯೋಜನೆಯ ಈ ರೂಪಾಂತರವು ಒಂದೆಡೆ ಆಧುನಿಕತೆ ಮತ್ತು ಪಾರದರ್ಶಕತೆಯನ್ನು ತರುತ್ತಿದೆ ಈ ಬದಲಾವಣೆ ಒಂದು ರೀತಿಯಿಂದ ಅನುಕೂಲಕರವಾಗಿದ್ದರೆ ಮತ್ತೊಂದು ರೀತಿಯಲ್ಲಿ ಅನಾನುಕೂಲಗಳು ಸಹ ಇವೆ, ರಾಜ್ಯ ಸರ್ಕಾರಗಳು ಈ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇಗೆ ನಿಭಾಯಿಸುತ್ತವೆ ಹಾಗೂ ಕೇಂದ್ರ ಸರಕಾರವು ನರೇಗಾ ಯೋಜನೆಯಲ್ಲಿನ ಬದಲಾವಣೆಯಿಂದಾಗಿ ದೇಶದ ಜನರಿಗೆ ತುಂಬಾ ಅನುಕೂಲಕರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಈ ಬಗ್ಗೆ ಪ್ರಯೋಗಿಕವಾಗಿ ಅನುಷ್ಥಾನವಾದ ಬಳಿಕ ಅಗತ್ಯ ಮಾಹಿತಿಯನ್ನು ತಿಳಿಯಬೇಕಾಗಿದೆ.

Website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್- Click Here