ವಿದ್ಯಾರ್ಥಿಗಳೇ ಗಮನಿಸಿ.! ಹಾಸ್ಟೆಲ್ ಸಿಗಲಿಲ್ವಾ? ಸರ್ಕಾರವೇ ಕೊಡುತ್ತೆ ₹20,000 ಹಣ - ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಕರ್ನಾಟಕ ಸರ್ಕಾರದಿಂದ, ಅರ್ಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹2000/- ದಂತೆ 10 ತಿಂಗಳಿಗೆ ಒಟ್ಟು ₹20,000/- ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಡಿಸೆಂಬರ್ 20ರ ವರೆಗೂ ಅವಕಾಶ ಕೊಡಲಾಗಿದೆ.

ರಾಜ್ಯದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕಾಲೇಜು ಕಲಿಯುತ್ತಿದ್ದಾರೆ. ಆದರೆ, ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೀಟ್ ಸಿಗದೆ, ದುಬಾರಿ ಬಾಡಿಗೆ ಕಟ್ಟಿ ರೂಮ್ ಅಥವಾ ಪಿಜಿ (PG) ಯಲ್ಲಿ ಇರಲು ಕಷ್ಟಪಡುತ್ತಿದ್ದಾರೆ.

ಅಂತಹ ವಿದ್ಯಾರ್ಥಿಗಳ ಸಂಕಷ್ಟಕ್ಕೆ ರಾಜ್ಯ ಸರ್ಕಾರ ‘ವಿದ್ಯಾಸಿರಿ’ (Vidyasiri – Food & Accommodation) ಯೋಜನೆಯ ಮೂಲಕ ನೆರವಾಗುತ್ತಿದೆ. 2025-26 ನೇ ಸಾಲಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ 20 ರವರೆಗೆ ವಿಸ್ತರಿಸಲಾಗಿದ್ದು, ಇದು ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶವಾಗಿದೆ.

ಈ ಯೋಜನೆಯಡಿ ನಿಮಗೆ ವರ್ಷಕ್ಕೆ ಬರೋಬ್ಬರಿ ₹20,000 ಹಣ ಸಿಗುತ್ತದೆ! ಇದರ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾಸಿರಿ ಯೋಜನೆ ಎಂದರೇನು? (What is it Vidyasiri Scholarship)

ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD) ಜಾರಿಗೆ ತಂದಿರುವ ಯೋಜನೆ. ಸರ್ಕಾರಿ ಅಥವಾ ಅನುದಾನಿತ ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಗದ (Hostel Seat Not Allotted) ವಿದ್ಯಾರ್ಥಿಗಳು, ಹೊರಗಡೆ ಬಾಡಿಗೆ ರೂಮ್ ಅಥವಾ ಪಿಜಿಯಲ್ಲಿ ಇದ್ದು ವ್ಯಾಸಂಗ ಮಾಡಲು ಊಟ ಮತ್ತು ವಸತಿಗಾಗಿ ಸರ್ಕಾರ ಹಣ ನೀಡುತ್ತದೆ.

ಹಣ ಎಷ್ಟು ಸಿಗುತ್ತದೆ? (Financial Benefit)

ವಿವರ ಮೊತ್ತ (Amount)

ಪ್ರತಿ ತಿಂಗಳು ₹ 2,000

ಒಟ್ಟು ಅವಧಿ 10 ತಿಂಗಳು (ಶೈಕ್ಷಣಿಕ ವರ್ಷ)

ಒಟ್ಟು ಸಿಗುವ ಹಣ ₹ 20,000 / ವರ್ಷಕ್ಕೆ

ಯಾರೆಲ್ಲಾ ಅರ್ಜಿ ಹಾಕಬಹುದು? (Strict Eligibility)

ಕೇವಲ ಅರ್ಜಿ ಹಾಕಿದರೆ ಸಾಲದು, ಈ ಕೆಳಗಿನ ನಿಯಮಗಳನ್ನು ಪೂರೈಸಿರಬೇಕು:

ಜಾತಿ: ಹಿಂದುಳಿದ ವರ್ಗಗಳು (OBC), ಪ್ರವರ್ಗ-1, 2A, 2B, 3A, 3B, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಕ್ಕೆ ಸೇರಿರಬೇಕು.

ದೂರದ ನಿಯಮ: ವಿದ್ಯಾರ್ಥಿಯ ಸ್ವಂತ ಊರಿನಿಂದ ಕಾಲೇಜಿಗೆ ಕನಿಷ್ಠ 5 ಕಿ.ಮೀ ದೂರ ಇರಬೇಕು. (ಅದೇ ಊರಿನಲ್ಲಿ ಮನೆ ಇದ್ದರೆ ಸಿಗುವುದಿಲ್ಲ).

ಹಾಜರಾತಿ: ಕಾಲೇಜಿನಲ್ಲಿ ಕನಿಷ್ಠ 75% ಹಾಜರಾತಿ (Attendance) ಕಡ್ಡಾಯವಾಗಿರಬೇಕು.

ವಿದ್ಯಾರ್ಹತೆ: ಹಿಂದಿನ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು (ಮಧ್ಯದಲ್ಲಿ ಓದು ಬಿಟ್ಟವರಿಗೆ ಸಿಗಲ್ಲ).

ಆದಾಯ: ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದ ಒಳಗಿರಬೇಕು.

ಬೇಕಾಗುವ ದಾಖಲೆಗಳು (Documents Checklist)

ಅರ್ಜಿ ಹಾಕುವಾಗ ಈ ದಾಖಲೆಗಳು ನಿಮ್ಮ ಬಳಿ ಇರಲೇಬೇಕು:

SSLC ಮತ್ತು PUC ಅಂಕಪಟ್ಟಿ (Marks Card).

ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD Number).

ಆಧಾರ್ ಕಾರ್ಡ್ (ಬ್ಯಾಂಕ್‌ಗೆ ಲಿಂಕ್ ಆಗಿರಬೇಕು).

ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್.

ಕಾಲೇಜಿನ ಬೋನಾಫೈಡ್ ಸರ್ಟಿಫಿಕೇಟ್ (Study Certificate).

ಹಾಸ್ಟೆಲ್ ಸೀಟ್ ಸಿಕ್ಕಿಲ್ಲ ಎಂಬುದಕ್ಕೆ ದೃಢೀಕರಣ (ಅಗತ್ಯವಿದ್ದರೆ ಮಾತ್ರ).

ಅರ್ಜಿ ಸಲ್ಲಿಸುವುದು ಹೇಗೆ? (Step-by-Step SSP Process)

ವಿದ್ಯಾಸಿರಿ ಯೋಜನೆಗೆ ಪ್ರತ್ಯೇಕ ವೆಬ್‌ಸೈಟ್ ಇಲ್ಲ. ನೀವು SSP Portal ಮೂಲಕವೇ ಅರ್ಜಿ ಹಾಕಬೇಕು.

ಹಂತ 1: ssp.karnataka.gov.in ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ‘Create Account’ ಕ್ಲಿಕ್ ಮಾಡಿ, ಆಧಾರ್ ನಂಬರ್ ಹಾಕಿ e-KYC ಮಾಡಿ.

ಹಂತ 3: ಲಾಗಿನ್ ಆದ ನಂತರ, ನಿಮ್ಮ ವೈಯಕ್ತಿಕ ಮತ್ತು ಕಾಲೇಜು ವಿವರ ಭರ್ತಿ ಮಾಡಿ.

ಹಂತ 4: ಅಲ್ಲಿ “Day Scholar” ಅಥವಾ “Hosteller” ಎಂದು ಕೇಳುವಲ್ಲಿ, ನೀವು ಹಾಸ್ಟೆಲ್ ಸಿಗದೇ ಇದ್ದರೆ, ವಿದ್ಯಾಸಿರಿ ಆಯ್ಕೆ ತೋರಿಸುತ್ತದೆ (ಅಥವಾ ಹಿಂದುಳಿದ ವರ್ಗಗಳ ಇಲಾಖೆ ಆಯ್ಕೆ ಮಾಡಿ).

ಹಂತ 5: ದಾಖಲೆ ಅಪ್‌ಲೋಡ್ ಮಾಡಿ, “Final Submit” ಕೊಡಿ.

ಹಂತ 6: ಸ್ವೀಕೃತಿ ಪತ್ರ (Acknowledgement) ಡೌನ್‌ಲೋಡ್ ಮಾಡಿಕೊಳ್ಳಿ.

ಹಣ ಯಾವಾಗ ಬರುತ್ತೆ?

ಅರ್ಜಿ ಪರಿಶೀಲನೆ ಆದ ನಂತರ, ನಿಮ್ಮ ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ (ಪ್ರತಿ 3 ತಿಂಗಳಿಗೆ ಒಮ್ಮೆ ಅಥವಾ ವರ್ಷದ ಕೊನೆಯಲ್ಲಿ ಒಟ್ಟಿಗೆ) ಹಣ ಜಮೆ ಆಗುತ್ತದೆ.



Previous Post Next Post