ರಾಜ್ಯದಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಇದರಿಂದ ಬಡವರು ಪಡಿತರ ಮತ್ತು ಆಸ್ಪತ್ರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಹಾರ ಇಲಾಖೆ ಅನರ್ಹರನ್ನು ಗುರುತಿಸಿ ಈ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿದಾರರು, ಹೆಚ್ಚುವರಿ ಕೃಷಿ ಭೂಮಿ ಹೊಂದಿರುವವರ ಕಾರ್ಡ್ಗಳು ರದ್ದಾಗಿವೆ. ಅಕ್ರಮ ಕಾರ್ಡ್ದಾರರಿಗೆ ದಂಡ ವಿಧಿಸುವ ಬಗ್ಗೆ ನಿಯಮ ರೂಪಿಸಲಾಗುತ್ತಿದ್ದು, ಇದರಿಂದಾಗಿ ಹಲವು ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ.
- ರಾಜ್ಯಾದ್ಯಂತ 'ಆಪರೇಷನ್ ಬಿಪಿಎಲ್' ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು
- ಇದರಿಂದ ಅನೇಕ ಬಡವರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ತೊಂದರೆ
- 13.87 ಲಕ್ಷ ಪಡಿತರ ಚೀಟಿಗಳನ್ನು ಸಂಪೂರ್ಣವಾಗಿ ಮತ್ತು ಹಂತ ಹಂತವಾಗಿ ರದ್ದುಗೊಳಿಸಲು ರಾಜ್ಯ ಸರಕಾರ ನಿರ್ಧಾರ
- ‘ಆಪರೇಷನ್ ಬಿಪಿಎಲ್’ ಎಂಬ ಹೆಸರಿನಡಿ ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಸಹಸ್ರಾರು ಮಂದಿ ಬಡವರು ಪಡಿತರಕ್ಕಿಂತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲಾಗದೆ ತೊಂದರೆಗೊಳಗಾಗಿದ್ದಾರೆ.
- ಮಾನದಂಡ ಉಲ್ಲಂಘಿಸಿ ಅನರ್ಹರು ಪಡೆದಿದ್ದ ಸುಮಾರು 4.09 ಲಕ್ಷಕ್ಕೂ ಅಕ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಈ ಮೂಲಕ ಲಕ್ಷಾಂತರ ಸದಸ್ಯರ ಹೆಸರು ಡಿಲಿಟ್ ಮಾಡಲಾಗಿದೆ. ಇದು ಸರಕಾರಕ್ಕೆ ವರದಾನವಾದರೆ, ಗ್ರಾಹಕರಿಗೆ ಸಂಕಷ್ಟವಾಗಿದೆ.
- ಸರಕಾರದ ನಾನಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿರುವ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯು ತೆರಿಗೆ ಪಾವತಿದಾರರು, ಹೆಚ್ಚುವರಿ ಕೃಷಿ ಭೂಮಿ ಹೊಂದಿರುವವರೂ ಸೇರಿದಂತೆ ಹಲವು ವರ್ಗದಲ್ಲಿ ನಾನಾ ಅನರ್ಹರನ್ನು ಗುರುತಿಸಿ, ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದೆ. ಹಲವರು ರೇಷನ್ಗಾಗಿ ಕಾರ್ಡ್ಗಳನ್ನು ಹೊಂದಿರುವುದಕ್ಕಿಂತ ಬಡತನ ರೇಖೆಗಿಂತ ಕೆಳಗಿರುವವರು ಆಸ್ಪತ್ರೆ ಸೌಲಭ್ಯ ಹಾಗೂ ಇತರೆ ಸರಕಾರಿ ಸೇವೆಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ.
ಅನರ್ಹ ಪರಿತರ ಚೀಟಿ
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳ ಪೈಕಿ ನಾನಾ ಕಾರಣಗಳಿಗೆ 7.76 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳು ಅನರ್ಹ ಎಂದು ಕೇಂದ್ರ ಸರಕಾರ ಗುರುತಿಸಿದೆ. ರಾಜ್ಯ ಸರಕಾರದ ‘ಕುಟುಂಬ ತಂತ್ರಾಂಶ’ದ ಪ್ರಕಾರ 13.87 ಲಕ್ಷಕ್ಕೂ ಅಧಿಕ ಅನರ್ಹ ಪಡಿತರ ಚೀಟಿಗಳಿವೆ. ಹೀಗಾಗಿ, ನಿರಂತರ ಪ್ರಕ್ರಿಯೆ ಮೂಲಕ ಇವುಗಳನ್ನು ಹಂತ- ಹಂತವಾಗಿ ರದ್ದುಪಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಅಕ್ರಮ ಬಿಪಿಎಲ್ ಕಾರ್ಡ್ದಾರರಿಗೆ ದಂಡ
‘‘ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಪಡೆದು ಸರಕಾರದ ಪಡಿತರ ಯೋಜನೆಯ ಲಾಭ ಪಡೆದುಕೊಂಡಿರುವ ಫಲಾನುಭವಿಗಳಿಗೆ ದಂಡ ವಿಧಿಸುವ ಬಗ್ಗೆ ಆಹಾರ ಇಲಾಖೆ ನಿಯಮಗಳನ್ನು ರೂಪಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಅಧಿಕಾರಿಗಳು ತಿಳಿಸಿರುವಂತೆ, ಈ ದಂಡದ ವಿಧಾನವು ಅಕ್ರಮಗಳನ್ನು ತಡೆಗಟ್ಟುವ ಜತೆಗೆ ಸರಕಾರದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಖಾತರಿಪಡಿಸುವ ಗುರಿ ಹೊಂದಿದೆ,’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಕ್ಯೂರಿಟಿ ಕೆಲಸ ಕಾರ್ಡ್ ರದ್ದು
ನಾನು ಸೆಕ್ಯೂರಿಟಿ ಕೆಲಸ ಮಾಡುತ್ತೇನೆ. ಮಗ-ಮಗಳು ಓದುತ್ತಿದ್ದಾರೆ. ಹೆಂಡತಿ ಗೃಹಿಣಿ. ನಾವೇನೂ ಶ್ರೀಮಂತರಲ್ಲ. ಬಾಡಿಗೆ ಮನೆಯಲ್ಲಿದ್ದೇವೆ. ಆದರೂ ನಮಗಿದ್ದ ಬಿಪಿಎಲ್ ಕಾರ್ಡ್ ರದ್ದುಪಡಿಸಿದರು. ಕಳೆದ ವಾರ ಹೃದಯಾಘಾತಕ್ಕೆ ಒಳಗಾದೆ. ಆದರೆ ನಮ್ಮದು ಬಿಪಿಎಲ್ ಕಾರ್ಡ್ ಇಲ್ಲದ ಪರಿಣಾಮ ಸಾಲ ಮಾಡಿ ಚಿಕಿತ್ಸೆ ಪಡೆಯುವಂತಾಗಿದೆ. ಇದೀಗ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಆಸ್ಪತ್ರೆ ವೆಚ್ಚವೂ ಭರಿಸಲಾಗದೆ, ಮನೆ ನಿಭಾಯಿಸುವುದು ತುಂಬಾ ಕಷ್ಟವಾಗಿದೆ. ಸರಕಾರ ಏಕೆ ನಮ್ಮಂತಹ ಬಡವರ ಹೊಟ್ಟೆ ಮೇಲೆ ಹೊಡೆಯುತ್ತದೆ? ಎಂದು ಅಳಲು ತೋಡಿಕೊಂಡಿದ್ದಾರೆ ಸೆಕ್ಯೂರಿಟಿ ಉದ್ಯೋಗಿ ಪ್ರಸನ್ನ.