ಹೊಸ ರೇಷನ್ ಕಾರ್ಡ್ ಪಡೆಯೋದು ಹೇಗೆ? ಇಲ್ಲಿದೆ ಸರಳ ಮತ್ತು ಕಂಪ್ಲೀಟ್ ಡೀಟೇಲ್ಸ್

ಹೊಸ ಪಡಿತರ ಚೀಟಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯ.ಇ-ಕೆವೈಸಿ ಇಲ್ಲದವರು ಪಡಿತರದಿಂದ ವಂಚಿತರಾಗಬಹುದು

ಪಡಿತರ ಚೀಟಿ ಪಡೆಯಲು ಅಗತ್ಯ ದಾಖಲೆಗಳು ವಿವರ

ಬೆಂಗಳೂರು (Bengaluru): ಇತ್ತೀಚೆಗೆ ಕರ್ನಾಟಕ ಸರ್ಕಾರ (Karnataka Government) ಪಡಿತರ ಚೀಟಿಯ (Ration Card) ಎಲ್ಲಾ ಪ್ರಕ್ರಿಯೆಗಳನ್ನು ಆಧುನಿಕ ಪಡಿಯಲ್ಲಿ ರೂಪಿಸಿದೆ. ಇದರಲ್ಲಿ ಇ-ಕೆವೈಸಿ (eKYC) ಪ್ರಮುಖ ಭಾಗವಾಗಿದೆ.

ಇ-ಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಮುಂದಿನ ತಿಂಗಳಿಂದ ಪಡಿತರ ವಿತರಣೆ ಸ್ಥಗಿತಗೊಳ್ಳಲಿದೆ ಎಂದು ಆಹಾರ ಇಲಾಖೆ ಎಚ್ಚರಿಸಿದೆ.

ಇ-ಕೆವೈಸಿ ಪ್ರಕ್ರಿಯೆಗೆ ಒಳಪಡುವುದಕ್ಕಾಗಿ ಫಲಾನುಭವಿಗಳು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ನೀಡಬೇಕು. ಇದರಿಂದ, ಪಡಿತರ ಕಾರ್ಡ್ ನ ವಿವರಗಳು ನವೀಕರಿಸಿ ಇ-ಕೆವೈಸಿ ಪೂರ್ಣಗೊಳ್ಳುತ್ತದೆ. ಈ ಕ್ರಮದಿಂದ ಪಡಿತರದ ಪದಾರ್ಥಗಳ ದುರ್ಬಳಕೆಗೆ ಕಡಿವಾಣ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ಸೇರ್ಪಡೆ ಅಥವಾ ತೆರವಿಗೆ ಸಂಬಂಧಿಸಿದ ಸೇವೆಗಳು ಇದೀಗ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಲಭ್ಯವಿದೆ. ಈ ಸೇವೆಗಾಗಿ 20 ರೂ. ಶುಲ್ಕವಿದ್ದು, 7 ಕೆಲಸದ ದಿನಗಳಲ್ಲಿ ಸೇವೆ ಲಭ್ಯವಾಗಲಿದೆ. ಸೇವೆಯ ಉದ್ದೇಶ ಸ್ಪಷ್ಟ – ಕುಟುಂಬದ ವಿವರಗಳನ್ನು ಸರಿಯಾಗಿ ನವೀಕರಿಸಿ, ಸರ್ಕಾರದ ಸವಲತ್ತುಗಳಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು.

ಹೆಸರು ಸೇರಿಸಲು ಅಥವಾ ತೆಗೆಯಲು, ಸಂಬಂಧಪಟ್ಟ ಆಹಾರ ಇಲಾಖೆ ಸಂಪರ್ಕಿಸಿ. ಅರ್ಜಿದಾರರು ಮೊದಲು ಸೇವಾ ಕೇಂದ್ರದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ, ನಂತರ ಸ್ವೀಕೃತ ಪತ್ರ ಹಾಗೂ ಮೂಲ ಪಡಿತರ ಚೀಟಿಯೊಂದಿಗೆ ಆಹಾರ ಕಚೇರಿಗೆ ಭೇಟಿ ನೀಡಬೇಕು. ಬದಲಾವಣೆಗಳನ್ನು ಪರಿಶೀಲಿಸಿದ ನಂತರ ಪರಿಷ್ಕೃತ ಪಡಿತರ ಚೀಟಿ ವಿತರಿಸಲಾಗುತ್ತದೆ.

ಪಡಿತರ ಚೀಟಿಗಳ ಪ್ರಕಾರ, ಕರ್ನಾಟಕದಲ್ಲಿ ಮೂರು ಪ್ರಕಾರಗಳಿವೆ – ಎಪಿಎಲ್ (APL), ಬಿಪಿಎಲ್ (BPL), ಮತ್ತು ಅಂತ್ಯೋದಯ (Antyodaya). ಪ್ರತಿ ಕಾರ್ಡಿಗೂ ಹೊಂದುವ ಅರ್ಹತಾ ಮಾನದಂಡಗಳಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ಉಚಿತ ಅಥವಾ ಕಡಿಮೆ ದರದ ಅಕ್ಕಿ, ಗೋಧಿ ಮುಂತಾದ ಆಹಾರವಸ್ತುಗಳನ್ನು ನೀಡಲಾಗುತ್ತದೆ.

BPL Ration Card ಹೊಸ ರೇಷನ್ ಕಾರ್ಡ್

ಹೊಸ ಪಡಿತರ ಚೀಟಿ ಬೇಕಾದವರು www.ahara.kar.nic.in ವೆಬ್‌ಸೈಟ್‌ಗೆ ಹೋಗಿ “New Ration Card Application” ಆಯ್ಕೆಮಾಡಿ (online ration card application). ಕುಟುಂಬದ ಸದಸ್ಯರ ವಿವರ, ಆಧಾರ್, ವಿಳಾಸದ ಪುರಾವೆ, ಮತ್ತು ಪಾಸ್ಪೋರ್ಟ್ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸುಮಾರು 15–40 ಕೆಲಸದ ದಿನಗಳಲ್ಲಿ ಹೊಸ ಚೀಟಿ ವಿತರಿಸಲಾಗುತ್ತದೆ.

ಅರ್ಜಿ ಸ್ಥಿತಿ ಪರಿಶೀಲನೆಗೆ https://ahara.kar.nic.in/status1 ಎಂಬ ವೆಬ್‌ಸೈಟ್ ಅನ್ನು ಉಪಯೋಗಿಸಬಹುದು. ಅರ್ಜಿ ಪ್ರಕ್ರಿಯೆಯಲ್ಲಿ ದೋಷ ಉಂಟಾದರೆ ಅಥವಾ ವೇಳೆಗೆ ಸೇವೆ ಸಿಗದಿದ್ದರೆ, ತಹಶೀಲ್ದಾರ್ ಅಥವಾ ವಲಯ ಉಪನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

OTP ಮೂಲಕ ಪಡಿತರ ಪಡೆಯುವ ವ್ಯವಸ್ಥೆಯು ಈಗ ಬದಲಾಗಿದ್ದು, ಬಯೋಮೆಟ್ರಿಕ್ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಈಗ ಪಡಿತರ ಪಡೆಯಲು ಕುಟುಂಬದ ಯಾರಾದರೂ ಅಂಗಡಿಗೆ ಬಂದು ಬೆರಳಚ್ಚು ನೀಡಲೇಬೇಕು. ಇದರೊಂದಿಗೆ ಇ-ಕೆವೈಸಿ ಪ್ರಕ್ರಿಯೆ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.

ಇ-ಕೆವೈಸಿಯ ಅವಶ್ಯಕತೆ, ಡಿಜಿಟಲ್ ಪರಿವರ್ತನೆಯ ಭಾಗವಾಗಿ, ಪಡಿತರ ವ್ಯವಹಾರದಲ್ಲಿ ಸುಧಾರಣೆ ತರಲು ಇಟ್ಟುಕೊಳ್ಳಲಾಗಿದೆ. ಆಹಾರ ಇಲಾಖೆದ ಪ್ರಕಾರ, ಇ-ಕೆವೈಸಿ ಪ್ರಕ್ರಿಯೆ ಇಲ್ಲದವರು ಪಡಿತರ ಪಡೆಯಲು ಅರ್ಹರಾಗಿರುವುದಿಲ್ಲ.

ಸದ್ಯದಲ್ಲೇ ಸರ್ಕಾರದಿಂದ ಶುಭವಾರ್ತೆ!

ರಾಜ್ಯದಲ್ಲಿ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲು ಆಹಾರ ಇಲಾಖೆ ತಯಾರಿ ನಡೆಸುತ್ತಿದೆ. 2023-24 ಹಾಗೂ 2024-25ನೇ ಸಾಲಿನಲ್ಲಿ ಬಂದ 3,93,450 ಅರ್ಜಿಗಳ ಪೈಕಿ 3,05,325 ಅರ್ಜಿಗಳು ಅರ್ಹವಾಗಿವೆ. ಈ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನಿಸಲು ಅನುಮತಿ ನೀಡುವಂತೆ ಸಚಿವರು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯದ ಫಲಾನುಭವಿಗಳ ಗರಿಷ್ಠ ಮಿತಿಯನ್ನು 4.02 ಕೋಟಿ ಎಂದು ನಿಗದಿಪಡಿಸಿದ್ದು, ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 17,48,989 ಬಿಪಿಎಲ್ ಕಾರ್ಡ್‌ಗಳಡಿ 49,67,187 ಜನರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ವಿತರಿಸುತ್ತಿದೆ.

ಆರ್ಥಿಕ ಇಲಾಖೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸಿ, ಅರ್ಜಿ ಆಹ್ವಾನಕ್ಕೆ ಸಚಿವ ಸಂಪುಟ ಅನುಮೋದನೆ ಪಡೆಯುವ ಕ್ರಮವೂ ಮುಂದಾಗಿದೆ. ಆದ್ಯತಾ (BPL) ಮತ್ತು ಆದ್ಯತೆಯೇತರ (APL) ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲು ಸರ್ಕಾರ ಚಟುವಟಿಕೆ ಆರಂಭಿಸಿದೆ.

BPL Ration Card ಅರ್ಜಿಗೆ ಓಡಾಟವೇ ಹೆಚ್ಚು!

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸುಲಭವೇನಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿಗದಿಪಡಿಸಿರುವ ನಿರ್ದಿಷ್ಟ ಸಮಯದಲ್ಲಿಯೇ ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು.

ಇಡೀ ರಾಜ್ಯದಲ್ಲಿ ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸುವ ಪ್ರಯತ್ನದಿಂದ ಸರ್ವರ್‌ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಸೇವಾ ಕೇಂದ್ರದವರು ಸ್ಪಂದಿಸದ ಕಾರಣ ಅರ್ಜಿದಾರರು ತಿರುಗಾಡುವಂತಾಗಿದೆ. ಹಲವರು ಅರ್ಜಿ ಸಲ್ಲಿಸಿದರೂ, ಸರ್ಕಾರದಿಂದ ಅಂತಿಮ ಒಪ್ಪಿಗೆ ಲಭ್ಯವಿಲ್ಲವೆಂದು ಪಡಿತರ ಚೀಟಿಗಾಗಿ ಕಾಯುತ್ತಿರುವವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


Previous Post Next Post