ಎಲ್ಲಾ ರೈತ ಮಿತ್ರರಿಗೆ ನಮಸ್ಕಾರಗಳು, ಈ ಲೇಖನದಲ್ಲಿ ರೈತರು ಪ್ರತಿ ತಿಂಗಳು ಉಳಿತಾಯ ಮಾಡಿ ಕೆಲವು ವರ್ಷಗಳ ಬಳಿಕ ಪ್ರತಿ ತಿಂಗಳು ರೂ 3,000/- ದವರೆಗೆ ಪಿಂಚಣಿಯನ್ನು(Best pension scheme) ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ಒಂದು ವರ್ಷಕ್ಕೆ ರೂ 6,000/- ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ ಈ ಯೋಜನೆಯ ಸಲ್ಪ ಹಣವನ್ನು(savings plan) ಉಳಿತಾಯ ಮಾಡಿ ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಪಿಂಚಣಿ ಯೋಜನೆಗೆ ಬಳಕೆ ಮಾಡಿಕೊಂಡು ರೈತರು 60 ವರ್ಷದ ಬಳಿಕ ಪ್ರತಿ ತಿಂಗಳು ರೂ 3,000 ಪಿಂಚಣಿಯನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ(PMKMY) ಈ ಯೋಜನೆಯ ಮೂಲಕ ಕೇಂದ್ರ ಸರಕಾರದಿಂದ ರೈತರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇತರೆ ವಿವರವನ್ನು ಇಲ್ಲಿ ತಿಳಿಸಲಾಗಿದೆ.
Pradhana mantri kisan maan dhan yojana(PMKMY)ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ:
ಕೇಂದ್ರ ಸರಕಾರದಿಂದ 2019 ರಿಂದ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಕೃಷಿ ಇಲಾಖೆ ಮತ್ತು ಭಾರತೀಯ ಜೀವ ವಿಮಾ ನಿಗಮ(LIC) ಸಹ ಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದೆ.
ಈ ಯೋಜನೆಯಡಿ 18 ವರ್ಷದಿಂದ 40 ವರ್ಷ ವಯಸ್ಸಿನ ಎಲ್ಲಾ ವರ್ಗದ ರೈತರಿಗೆ ಪಿಂಚಣಿ(investing) ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿದಾರರು ಈ ಯೋಜನೆಯ ಪ್ರಯೋಜನ ಪಡೆಯಲು ಪ್ರತಿ ತಿಂಗಳು ರೂ 55/- ರಿಂದ ರೂ 200/- ಪಿಂಚಣೆ ಯೋಜನೆಗೆ ಪಾವತಿ ಮಾಡಿ 60 ವರ್ಷದ ನಂತರ ಪ್ರತಿ ತಿಂಗಳು ರೂ 3,000 ಪಿಂಚಣಿಯನ್ನು ಪಡೆಯಬಹುದು.
PMKMY Yojana Apply Method-ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ನಿಮ್ಮ ಹತ್ತಿರದ CSC ಸೆಂಟರ್, ಗ್ರಾಮ್ ಒನ್/ಬೆಂಗಳೂರು ಒನ್/ಕರ್ನಾಟಕ ಒನ್/, ಅಥವಾ ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಪಿಂಚಣಿ ಕೊಡುಗೆಯನ್ನು ಪಾವತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Age wise pesion fee amount-ಅರ್ಜಿದಾರರ ವಯಸ್ಸಿನವಾರು ಪ್ರತಿ ತಿಂಗಳು ಪಾವತಿ ಮಾಡಬೇಕಾದ ಪಿಂಚಣಿ ಕೊಡುಗೆ:
Document for pesion yojana application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
1) ಆಧಾರ್ ಕಾರ್ಡ/aadhar
2) ಪೋಟೋ/Photo
3) ಬ್ಯಾಂಕ್ ಪಾಸ್ ಬುಕ್/Bank pass book
4) ಪಾನ್ ಕಾರ್ಡ್/Pan card
5) ಮೊಬೈಲ್ ನಂಬರ್/Mobile number
Who can apply for PMKMY- ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ(PMKMY)ಯಡಿ 60 ವರ್ಷ ತುಂಬಿದ ಬಳಿಕ ಮಾಸಿಕ ರೂ 3,000/- ಪಿಂಚಣಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ಕೆಳಗೆ ತಿಳಿಸಲಾಗಿದೆ.
1) 40 ವರ್ಷ ದಿಂದ 60 ವರ್ಷ ಒಳಗಿನ ರೈತರು ಅರ್ಜಿ ಸಲ್ಲಿಸಬಹುದು.
2) ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನು ಇದ್ದು ಸ್ವತಃ ಸಾಗುವಳಿಯನ್ನು ಮಾಡುತ್ತಿರಬೇಕು.
3) ರಾಷ್ಟ್ರೀಯ ಪಿಂಚಣಿ ಯೋಜನೆ (NPS), ನೌಕರರ ರಾಜ್ಯ ವಿಮಾ ನಿಗಮ ಯೋಜನೆ, ಉದ್ಯೋಗಿಗಳ ನಿಧಿ ಸಂಸ್ಥೆ ಯೋಜನೆ ಇತ್ಯಾದಿಗಳಂತಹ ಇತರ ಯೋಜನೆಗಳ ಅಡಿಯಲ್ಲಿ ಈಗಾಗಲೇ ನೋಂದಾಯಿಸಲ್ಪಟ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರು PM-KMY ಯೋಜನೆಗೆ ಅರ್ಹರಾಗಿರುವುದಿಲ್ಲ.
4) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಿರ್ವಹಿಸುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (PMSYM) ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮಾನ್-ಧನ್ ಯೋಜನೆ (PM-LVM) ಗಾಗಿ ಅರ್ಜಿ ಸಲ್ಲಿಸಿದವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
Scheme guidelines- ಯೋಜನೆಯ ಮಾರ್ಗಸೂಚಿ- Download Now