Independence day 2024: ಭಾರತದ ಭೂಪುಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

Independence day 2024: ಭಾರತದ ಭೂಪುಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

ಒಮ್ಮೆಲೇ ನೋಡಿದರೆ ಇದು ಭಾರತದ ಭೂಪಟದಂತೆಯೇ( Indian Map) ಕಾಣುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಈ ಜಲಾಶಯದ ವಿಶೇಷ ಗೊತ್ತೆ. ಇಲ್ಲಿದೆ ಚಿತ್ರವಿವರ.



ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.



ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯವಿದ್ದು, ಇದು ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ಕೃಷ್ಣಾ ಜಲಭಾಗ್ಯ ಯೋಜನೆಯಡಿ ಇದನ್ನು ಸೇರಿಸಲಾಗಿದೆ.



 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯವಿದ್ದು, ಇದು ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ಕೃಷ್ಣಾ ಜಲಭಾಗ್ಯ ಯೋಜನೆಯಡಿ ಇದನ್ನು ಸೇರಿಸಲಾಗಿದೆ.

ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು “ಮೈಸೂರು ಸಂಸ್ಥಾನ”ದ  ಅರಸರಾದ “ನಾಲ್ವಡಿ ಕೃಷ್ಣರಾಜ ಒಡೆಯರ್” ರವರ ತಾಯಿಯಾದ “ಕೆಂಪ ನಂಜಮ್ಮಣಿ ವಾಣಿ ವಿಲಾಸ” ಸನ್ನಿಧಾನ ಇವರ ಹೆಸರಿನಲ್ಲಿ 1898 ರಿಂದ 1907 ರಲ್ಲಿ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.



ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು “ಮೈಸೂರು ಸಂಸ್ಥಾನ”ದ ಅರಸರಾದ “ನಾಲ್ವಡಿ ಕೃಷ್ಣರಾಜ ಒಡೆಯರ್” ರವರ ತಾಯಿಯಾದ “ಕೆಂಪ ನಂಜಮ್ಮಣಿ ವಾಣಿ ವಿಲಾಸ” ಸನ್ನಿಧಾನ ಇವರ ಹೆಸರಿನಲ್ಲಿ 1898 ರಿಂದ 1907 ರಲ್ಲಿ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಸಂಪೂರ್ಣ ಬರದನಾಡು ಆಗಿದ್ದು, ನೀರಾವರಿ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿತ್ರದುರ್ಗ ಹಾಗೂ ತುಮಕೂರಿನ ಕೆಲ ಭಾಗದಲ್ಲೂ ಈ ಜಲಾಶಯದಿಂದ ನೀರು ಹರಿಸಲಾಗುತ್ತದೆ.



ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಸಂಪೂರ್ಣ ಬರದನಾಡು ಆಗಿದ್ದು, ನೀರಾವರಿ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿತ್ರದುರ್ಗ ಹಾಗೂ ತುಮಕೂರಿನ ಕೆಲ ಭಾಗದಲ್ಲೂ ಈ ಜಲಾಶಯದಿಂದ ನೀರು ಹರಿಸಲಾಗುತ್ತದೆ.

1907ರಲ್ಲಿ ವಿ.ವಿ ಸಾಗರ ಜಲಾಶಯ ನಿರ್ಮಿಸಿದ ನಂತರ 1933 ರಲ್ಲಿ ಮೊದಲ ಬಾರಿಗೆ ಗರಿಷ್ಟ ಮಟ್ಟ 130 ಅಡಿ ತಲುಪಿ 30 TMC ನೀರು ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 22.00 ಟಿ.ಎಂ.ಸಿ ನೀರು 2000 ಇಸವಿಯಲ್ಲಿ ಸಂಗ್ರಹವಾಗಿರುವುದು ದಾಖಲೆಯಾಗಿದೆ. ಉಳಿದಂತೆ ಕಳೆದ 10 ವರ್ಷಗಳಲ್ಲಿ (2019-20ರ ಹಿಂದಿನ) ಮಳೆಯ ಕೊರತೆಯಿಂದ ಜಲಾಶಯಕ್ಕೆ ಗಣನೀಯವಾಗಿ ಒಳಹರಿವು ಕ್ಷೀಣಿಸಿದೆ. ಈ ಬಾರಿ ಉತ್ತಮ ಮಳೆಯಾಗಿ ನೀರು ಹರಿದು ಬಂದಿದೆ.



1907ರಲ್ಲಿ ವಿ.ವಿ ಸಾಗರ ಜಲಾಶಯ ನಿರ್ಮಿಸಿದ ನಂತರ 1933 ರಲ್ಲಿ ಮೊದಲ ಬಾರಿಗೆ ಗರಿಷ್ಟ ಮಟ್ಟ 130 ಅಡಿ ತಲುಪಿ 30 TMC ನೀರು ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 22.00 ಟಿ.ಎಂ.ಸಿ ನೀರು 2000 ಇಸವಿಯಲ್ಲಿ ಸಂಗ್ರಹವಾಗಿರುವುದು ದಾಖಲೆಯಾಗಿದೆ. ಉಳಿದಂತೆ ಕಳೆದ 10 ವರ್ಷಗಳಲ್ಲಿ (2019-20ರ ಹಿಂದಿನ) ಮಳೆಯ ಕೊರತೆಯಿಂದ ಜಲಾಶಯಕ್ಕೆ ಗಣನೀಯವಾಗಿ ಒಳಹರಿವು ಕ್ಷೀಣಿಸಿದೆ. ಈ ಬಾರಿ ಉತ್ತಮ ಮಳೆಯಾಗಿ ನೀರು ಹರಿದು ಬಂದಿದೆ.

ಈ ಸಣ್ಣ ಜಲಾಶಯವನ್ನು ಕಾಲಕಾಲಕ್ಕೆ ಆಧುನೀಕರಣ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಈ ಜಲಾಶಯ ನಿರ್ವಹಣೆ ಈಗಲೂ ಚೆನ್ನಾಗಿದೆ. ಚಿತ್ರದುರ್ಗ ಭಾಗದ ಪ್ರಮುಖ ಪ್ರವಾಸಿ ತಾಣವಾಗಿಯೂ ಇದು ರೂಪುಗೊಂಡಿದೆ. ಇದರ ಮೇಲ್ನೋಟ ಭಾರತದ ಭೂಪಟವನ್ನೇ ಹೋಲುವುದು ವಿಶೇಷ.

ಈ ಸಣ್ಣ ಜಲಾಶಯವನ್ನು ಕಾಲಕಾಲಕ್ಕೆ ಆಧುನೀಕರಣ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಈ ಜಲಾಶಯ ನಿರ್ವಹಣೆ ಈಗಲೂ ಚೆನ್ನಾಗಿದೆ. ಚಿತ್ರದುರ್ಗ ಭಾಗದ ಪ್ರಮುಖ ಪ್ರವಾಸಿ ತಾಣವಾಗಿಯೂ ಇದು ರೂಪುಗೊಂಡಿದೆ. ಇದರ ಮೇಲ್ನೋಟ ಭಾರತದ ಭೂಪಟವನ್ನೇ ಹೋಲುವುದು ವಿಶೇಷ.


Post a Comment

Previous Post Next Post
CLOSE ADS
CLOSE ADS
×