World Heritage Day 2024: ಒಮ್ಮೆಯಾದರೂ ಕಣ್ತುಂಬಿಸಿಕೊಳ್ಳಬೇಕಾದ ಕರ್ನಾಟಕದ ವಿಶ್ವ ಪರಂಪರೆ ತಾಣಗಳಿವು

World Heritage Day 2024: ಒಮ್ಮೆಯಾದರೂ ಕಣ್ತುಂಬಿಸಿಕೊಳ್ಳಬೇಕಾದ ಕರ್ನಾಟಕದ ವಿಶ್ವ ಪರಂಪರೆ ತಾಣಗಳಿವು

World Heritage Sites in Karnataka: ಜಗತ್ತಿನಾದಂತ್ಯ ಹಲವಾರು ಐತಿಹಾಸಿಕ ಸ್ಮಾರಕಗಳು ಹಾಗೂ ತಾಣಗಳು ಗತಕಾಲದ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಈಗಾಗಲೇ ಭಾರತದ ಸೇರಿದಂತೆ ಕರ್ನಾಟಕದ ಹಲವಾರು ಇತಿಹಾಸ ಪ್ರಸಿದ್ಧ ತಾಣಗಳು ಕೂಡ ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಹಾಗಾದ್ರೆ ಆರು ಪ್ರಮುಖ ಕರ್ನಾಟಕದ ತಾಣಗಳ ಬಗೆಗಿನ ಮಾಹಿತಿಯೂ ಇಲ್ಲಿದೆ.



ನಮ್ಮಲಿರುವ ಹಲವಾರು ಸ್ಮಾರಕಗಳು ಹಾಗೂ ತಾಣಗಳು ಗತಕಾಲದ ವೈಭವ, ಭವ್ಯ ಪರಂಪರೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಇಡೀ ವಿಶ್ವಕ್ಕೆ ಎತ್ತಿ ತೋರಿಸಿದೆ. ಅದಲ್ಲದೇ ಜಗತ್ತಿನಾದಂತ್ಯ ಸಾವಿರಾರು ಪಾರಂಪರಿಕ ಹಾಗೂ ಐತಿಹಾಸಿಕ ತಾಣಗಳಿದ್ದು, ಇವುಗಳ ರಕ್ಷಣೆಯೂ ನಮ್ಮ ಮೇಲಿದೆ. ಈ ಸ್ಮಾರಕಗಳ ಇತಿಹಾಸ ಹಾಗೂ ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆ ದಿನ ಎಂದು ಆಚರಿಸಲಾಗುತ್ತಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಸಾಲಿಗೆ ಸೇರಿದ ಕರ್ನಾಟಕದ ತಾಣಗಳು:

ಪಟ್ಟದಕಲ್ಲು :



ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಈ ಪಟ್ಟದಕಲ್ಲು ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಒಂದು. ಚಾಲುಕ್ಯ ರಾಜವಂಶದಲ್ಲಿ ನಿರ್ಮಾಣವಾದ ಈ ಸ್ಮಾರಕಗಳು ಅಂದಿನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಈ ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯಲ್ಲಿದ್ದು, ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ಬೇಸಿಗೆಯ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ, ಅಂದಿನ ಕಾಲದ ಕಲಾ ನೈಪುಣ್ಯತೆಯನ್ನು ಕಣ್ತುಂಬಿಕೊಳ್ಳಬಹುದು.

ಹಂಪಿ :



ಕರ್ನಾಟಕದ ಇತಿಹಾಸ ಪ್ರಸಿದ್ಧ ತಾಣವಾಗಿರುವ ಹಂಪಿಯೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ತಾಣಗಳಲ್ಲಿ ಒಂದು. ಈ ಹಂಪಿಯೂ ವಿಜಯನಗರ ಕಾಲದ ವಾಸ್ತುಶಿಲ್ಪದ ಪ್ರಕಾರದಿಂದಲೇ ನೋಡುಗರನ್ನು ಗಮನ ಸೆಳೆಯುತ್ತಿದೆ.

ಶ್ರೀರಂಗಪಟ್ಟಣ ದ್ವೀಪ ಪಟ್ಟಣದ ಸ್ಮಾರಕಗಳು :




ಶ್ರೀರಂಗಪಟ್ಟಣವಿರುವುದು ಮಂಡ್ಯ ಜಿಲ್ಲೆಯ ಕಾವೇರಿ ನದಿಯ ಸಮೀಪದಲ್ಲಿ. ಇದು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಕರ್ನಾಟಕದ ಇತಿಹಾಸ ಪ್ರಸಿದ್ಧ ಹಾಗೂ ದೊಡ್ಡ ದೇವಾಲಯವಾದ ರಂಗನಾಥಸ್ವಾಮಿ ದೇವಾಲಯವನ್ನು ಇಲ್ಲಿ ಕಾಣಬಹುದು. ಶ್ರೀರಂಗ ಪಟ್ಟಣದಲ್ಲಿ ಕೋಟೆ, ಪಕ್ಷಿಧಾಮ ಸೇರಿದಂತೆ ಹಲವಾರು ಐತಿಹಾಸಿಕ ಸ್ಮಾರಕಗಳಿವೆ.

ಡೆಕ್ಕನ್ ಸುಲ್ತಾನರ ಕೋಟೆಗಳು ಹಾಗೂ ಸ್ಮಾರಕಗಳು :




ದಕ್ಷಿಣ ಭಾರತದಲ್ಲಿ 14ನೇ ಶತಮಾನದಿಂದ 18ನೇ ಶತಮಾನದವರೆಗೂ ಆಳ್ವಿಕೆ ನಡೆಸಿದ ಡೆಕ್ಕನ್‌ ಸುಲ್ತಾರು ನಿರ್ಮಿಸಿದ ಭವ್ಯ ಸ್ಮಾರಕ, ಕೋಟೆಗಳು, ಸಮಾದಿ, ಮಸೀದಿಗಳನ್ನು ಯುನೆಸ್ಕೋ ಪಾರಂಪರಿ ತಾಣಗಳ ಪಟ್ಟಿಗೆ ಸೇರಿದೆ. ಈ ಸ್ಮಾರಕಗಳನ್ನು ವಿಜಯಪುರ, ಕಲಬುರ್ಗಿ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿದ್ದು, ಇಸ್ಲಾಮಿಕ್ ಹಾಗೂ ಹಿಂದೂ ವಾಸ್ತುಶಿಲ್ಪಗಳನ್ನು ಕಾಣಬಹುದು.

ಹೊಯ್ಸಳೇಶ್ವರ ದೇವಾಲಯ :



ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಾಲಯಗಳು ಸೇರಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಯ ಗಮನಾರ್ಹ ವಾಸ್ತುಶಿಲ್ಪವನ್ನು ಹೊಂದಿದೆ. ಹೀಗಾಗಿ ಈ ದೇವಾಲಯಗಳು ವಿಭಿನ್ನವಾದ ಕೆತ್ತನೆಯಿಂದ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

ಪಶ್ಚಿಮ ಘಟ್ಟಗಳು :





ಕರ್ನಾಟಕದ ಪಶ್ಚಿಮಘಟ್ಟಗಳು ಸಾಲುಗಳನ್ನು ಕಣ್ಮನವನ್ನು ತಣಿಸುತ್ತದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿರುವ ಈ ಪಶ್ಚಿಮ ಘಟ್ಟದ ಸಾಲುಗಳು ಅನೇಕ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿರುವ ಈ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಿಂದ ಕಂಗೊಳಿಸುತ್ತಿದೆ.

Post a Comment

Previous Post Next Post
CLOSE ADS
CLOSE ADS
×