Encumbrance certificate Now Available Online : ರಾಜ್ಯ ಸರ್ಕಾರದ ಮುಂದ್ರಾಂಕ ಮತ್ತು ನೋಂದಣಿ ಇಲಾಖೆಯು ಸಾರ್ವಜನಿಕರಿಗೆ ಹೊಸ ಸೌಲಭ್ಯ ನೀಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಪ್ತ ತಂತ್ರಾಂಶಗಳ ಗುಚ್ಛ ಅನಾವರಣ ಮಾಡಿದ್ದಾರೆ. ಹಿಂದೂ ವಿವಾಹ ನೋಂದಣಿ, ಋಣಭಾರ ಪ್ರಮಾಣ ಪತ್ರ ಆನ್ಲೈನ್ನಲ್ಲಿ ಸಿಗಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹಿಂದೂ ವಿವಾಹ ನೋಂದಣಿ, ಋುಣಭಾರ ಪ್ರಮಾಣ ಪತ್ರ (ಇ.ಸಿ.) ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಅನಗತ್ಯವಾಗಿ ಉಪನೋಂದಣಿ ಕಚೇರಿಗೆ ಅಲೆಯುವ ಬದಲು ಆನ್ಲೈನ್ ಮೂಲಕವೇ ಪಡೆಯುವ ವ್ಯವಸ್ಥೆಯನ್ನು ಕಂದಾಯ, ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ಕಲ್ಪಿಸಿದೆ.
- ಕಾವೇರಿ .2 ತಂತ್ರಾಂಶವನ್ನು ಮತ್ತಷ್ಟು ಸರಳೀಕರಣಗೊಳಿಸಿರುವ ಇಲಾಖೆ ಜನಸ್ನೇಹಿ ಆನ್ಲೈನ್ ಸೇವೆಗಳನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ನಾಗರಿಕ ಸ್ನೇಹಿ ಆನ್ಲೈನ್ ಸೇವೆಗಳ ಸಪ್ತ (7) ತಂತ್ರಾಂಶಗಳ ಗುಚ್ಛವನ್ನು ಗುರುವಾರ ಅನಾವರಣಗೊಳಿಸಿದೆ.
- ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಉಪನೋಂದಣಿ ಕಚೇರಿಯಲ್ಲಿತಂತ್ರಾಂಶಗಳನ್ನು ಅನಾವರಣಗೊಳಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ವಿವಾಹ ನೋಂದಣಿ ಮಾಡಿಕೊಂಡ ನವ ದಂಪತಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
- ಹಿಂದೂ ವಿವಾಹಗಳ ನೋಂದಣಿ ಕಾಯಿದೆ-1995ರಡಿ ವಿವಾಹ ನೋಂದಣಿ ಸರಳೀಕರಣಗೊಳಿಸಿದ್ದು, ವಿವಾಹಿತರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಉಪನೋಂದಣಾಧಿಕಾರಿಗಳು ಅನುಮೋದಿಸಿದ ನಂತರ ನಿಗದಿತ ಶುಲ್ಕ ಪಾವತಿಸಿ ಆನ್ಲೈನ್ನಲ್ಲಿಯೇ ವಿವಾಹ ದೃಢೀಕರಣ ಪತ್ರ ಪಡೆಯಲು ಆನ್ಲೈನ್ ಹಿಂದೂ ವಿವಾಹ ನೋಂದಣಿ ತಂತ್ರಾಂಶ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
- ಅಲ್ಲದೆ, ವಿಶೇಷ ವಿವಾಹಗಳ ನೋಂದಣಿ ಕಾಯಿದೆ- 1995ರಡಿ ಉಪನೋಂದಣಿ ಕಚೇರಿಗಳಲ್ಲಿರಿಜಿಸ್ಟರ್ಡ್ ಮ್ಯಾರೇಜ್ ಆಗುವವರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ವಿಶೇಷ ವಿವಾಹಗಳ ನೋಂದಣಿ ತಂತ್ರಾಂಶವನ್ನೂ ಅಳವಡಿಸಲಾಗಿದೆ. ರಿಜಿಸ್ಟರ್ಡ್ ಮ್ಯಾರೇಜ್ಗೆ ಆನ್ಲೈನ್ ಮೂಲಕವೇ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಂಡು ನಂತರ ಕಚೇರಿಯಲ್ಲಿಬಂದು ವಿವಾಹವಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇಸಿ, ಸಿಸಿ ಪಡೆಯಲು ತಂತ್ರಾಂಶ
2004ಕ್ಕೂ ಮುನ್ನ ಋುಣಭಾರ ಪ್ರಮಾಣ ಪತ್ರ (ಇಸಿ) ಮತ್ತು ದೃಢೀಕೃತ ನಕಲು ಪ್ರತಿ (ಸಿಸಿ)ಗಾಗಿ ಕಚೇರಿಗೆ ಅರ್ಜಿ ಸಲ್ಲಿಸಿ, ಅಲ್ಲಿಯೇ ಬಂದು ಪಡೆಯಬೇಕಿತ್ತು. ಇದರ ಬದಲಿಗೆ ಅರ್ಜಿ ಸಲ್ಲಿಕೆ ಮತ್ತು ಹಣ ಪಾವತಿ ಎಲ್ಲವನ್ನೂ ಆನ್ಲೈನ್ ಮೂಲಕವೇ ಮಾಡಿ, ಉಪನೋಂದಣಾಧಿಕಾರಿಗಳು ಅಪ್ಲೋಡ್ ಮಾಡುವ ಇಸಿಗಳನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇಸಿ ಪಡೆಯಲು ತಂತ್ರಾಂಶ
- ಕೃಷಿ ಭೂಮಿ ಋುಣಭಾರ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಲು ಆನ್ಲೈನ್ನಧಿಲ್ಲಿಅರ್ಜಿ ಸಲ್ಲಿಸುವ ಸಮಯದಲ್ಲಿಗ್ರಾಮವನ್ನು ಜಿಐಎಸ್ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಕಲ್ಪಿಧಿಸಧಿಲಾಧಿಗಿಧಿದೆ.
- ಈ ವ್ಯವಸ್ಥೆಯಡಿ ಕೃಷಿ ಭೂಮಿ ವಿವರಗಳು ಸ್ವಯಂಚಾಲಿತವಾಗಿ ಭರ್ತಿಯಾಗುತ್ತವೆ. ಇದರಿಂದಾಗಿ ನಿಖರವಾದ ಇಸಿಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ನೋಂದಣಿ ಸಮಯದಲ್ಲಿಸಾವರ್ಜನಿಕರ ತಪ್ಪು ಅರಿವಿನಿಂದ ದಸ್ತಾವೇಜುಗಳ ತಪ್ಪು ವರ್ಗೀಕರಣ, ಸ್ವತ್ತುಗಳ ಅಪಮೌಲ್ಯ, ಕಾನೂನಿಧಿನ ತಪ್ಪು ವ್ಯಾಖ್ಯಾನ ಮತ್ತು ಇತರೆ ಕಾರಣಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ಸರಿಪಡಿಸಲು ನೋಂದಣಿ ಪೂರ್ವ ಪರಿಶೀಲನೆ ತಂತ್ರಾಂಶವನ್ನು ಅಳವಡಿಸಲಾಗಿದೆ.
ಆನ್ಲೈನ್ ಕ್ಯಾಲ್ಕುಲೇಟರ್ ಅಳವಡಿಕೆ
ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎಸ್ಎಚ್ಸಿಐಎಲ್) ಮುಖಾಂತರ ಇ-ಸ್ಟ್ಯಾಂಪ್ ಪೇಪರ್ಗಳನ್ನು ಒದಗಿಸಲಾಗುತ್ತಿದ್ದು, ಸಾರ್ವಜನಿಕರು ದಸ್ತಾವೇಜಿನ ಸ್ವರೂಪದ ಆಧಾರದ ಮೇಲೆ ಕರ್ನಾಟಕ ಮುದ್ರಾಂಕ ಕಾಯಿಧಿದೆ- 1957ರ ಷೆಡ್ಯೂಲ್ನಧಿಡಿ ನಿಗದಿಪಡಿಸಿರುವ ಮುದ್ರಾಂಕ ಶುಲ್ಕಕ್ಕೆ ಇ-ಸ್ಟ್ಯಾಂಪ್ ಪೇಪರ್ಗಳನ್ನು ಪಡೆಯಲು ಆಥರೈಸ್ಡ್ ಕಲೆಕ್ಷನ್ ಸೆಂಟರ್(ಎಸಿಸಿ)ಗಳಲ್ಲಿಆನ್ಲೈನ್ ಕ್ಯಾಲ್ಕುಲೇಟರ್ಗಳನ್ನು ಅಳವಡಿಸಲಾಗಿದೆ. ಇದರಿಂದ ನಿಗದಿಪಡಿಸಿದ ಮುದ್ರಾಂಕ ಶುಲ್ಕಕ್ಕೆ ಇ-ಸ್ಟ್ಯಾಂಪ್ ಪೇಪರ್ ವಿತರಿಸಲು ಅನುಕೂಲವಾಗಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಗದರ್ಶನ ಬೇಕಾದಲ್ಲಿಸಹಾಯವಾಣಿ: 080 68265316 ಸಂಪರ್ಕಿಸಬಹುದು.
ವಿವಾಹ ನೋಂದಣಿ ತಪ್ಪದೇ ಮಾಡಿಸಿ
''ರಾಜ್ಯದಲ್ಲಿಶೇ.30ರಷ್ಟು ವಿವಾಹಗಳು ಮಾತ್ರ ನೋಂದಣಿಯಾಗುತ್ತಿವೆ. ಹಾಗಾಗಿ, ವಿವಾಹವಾಗುವ ಎಲ್ಲರೂ ತಪ್ಪದೇ ವಿವಾಹ ನೋಂದಣಿ ಮಾಡಿಸಧಿಬೇಧಿಕು,'' ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮನವಿ ಮಾಡಿದರು. ಕಾರ್ಯಕ್ರಮದಲ್ಲಿಮಾತನಾಡಿದ ಅವರು, ''ನಮ್ಮ ಸರಕಾರ ರಚನೆಯಾದ ನಂತರ ಕಂದಾಯ ಇಲಾಖೆ ಸೇವೆಗಳನ್ನು ಸರಳೀಕರಣಗೊಳಿಸಲು ಸಾಕಷ್ಟು ಸುಧಾರಣೆ ಮಾಡಲಾಗಿದ್ದು, ಈ ರೀತಿಯ ಜನಸ್ನೇಹಿ ಸುಧಾರಣೆಗಳು ನಿರಂತರವಾಗಿ ನಧಿಡೆಧಿಯಧಿಲಿವೆ. ಕೇವಲ ಕಂದಾಯ, ಆದಾಯ ಸಂಗ್ರಹವಷ್ಟೇ ಇಲಾಖೆಯ ಆದ್ಯತೆಯಾಗಿರದೆ, ಜನಪರ ಆಡಳಿತ ಸುಧಾರಣೆಯೂ ನಮ್ಮ ದಿಕ್ಸೂಚಿಯಾಗಿದೆ,''ಎಂದರು.
